ರಾಜ್ಯದ ರೈತರಿಗೆ ಸಿಹಿ ಸುದ್ದಿ, ಆಗಸ್ಟ್ ನಲ್ಲಿ ಜಾರಿಯಾಗಲಿದೆ ಮತ್ತೊಂದು ಗ್ಯಾರಂಟಿ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲರೂ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಈ ಆಗಸ್ಟ್ 1ರಿಂದ ಬಜೆಟ್ ಮಂಡನೆ ಆಗಲಿದ್ದು, ರಾಜ್ಯದ ಜನರಿಗೆ ಮಧ್ಯಾವೆಲ್ಲ ಭಾಗ್ಯಗಳ ಲಾಭ ದೊರಕುತ್ತಿದೆ ಎಂದು ಕಾದುನೋಡಬೇಕಾಗಿದೆ. ಈ ಬಾರಿ ರೈತರಿಗಾಗಿ ಬಡ್ಡಿ ರಹಿತ ಸಾಲವನ್ನು ಮೂರರಿಂದ ಐದು ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ ಎಂಬುದು ಸರ್ಕಾರದ ಈ ಬಾರಿಯ ಮಹತ್ವದ ಯೋಜನೆಯಾಗಿದ್ದು, ಇದರಿಂದ ಸಾಕಷ್ಟು ರೈತರಿಗೆ ಮಾಹಿತಿಯ ಕೊರತೆ ಇದೆ.

ಇನ್ನು ಬಡ್ಡಿ ರಹಿತ ಸಾಲವನ್ನು ಹೆಚ್ಚಿಸಿರುವುದರ ಜೊತೆಗೆ, ಮೂರು ಪ್ರತಿಶತ ಬಡ್ಡಿ ದರದಲ್ಲಿ 15 ಲಕ್ಷದವರೆಗೂ ಕೂಡ ಸಾಲ ಸೌಲಭ್ಯ ಪಡೆಯುವ ಅವಕಾಶವನ್ನು ರೈತರಿಗೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಸಂಬಂಧಪಟ್ಟ ಇಲಾಖೆಗಳ ಜೊತೆ ಮಾತನಾಡಿ ಅವರಿಗೆ ಆದೇಶವನ್ನು ನೀಡಿದ್ದಾರೆ. ಈಗಾಗಲೇ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರಿಗೆ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ ಹಣ ನಿಂತಿದ್ದು, ಅದರ ಬದಲಾಗಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದುಕೊಳ್ಳುವ ಚಿಂತನೆಗಳು ನಡೆಯುತ್ತಿವೆ.

ಈ ಬಾರಿ ಕೃಷಿ ಕ್ಷೇತ್ರದ ಆಯವ್ಯಯಗಳನ್ನು ನಿರ್ಧರಿಸುವ ಸಂದರ್ಭದಲ್ಲಿ ಕೃಷಿ ಭಾಗ್ಯ ಯೋಜನೆಯನ್ನು (ಕೃಷಿ ಭಾಗ್ಯ ಯೋಜನೆ) ಕೂಡ ಮತ್ತೆ ಮರುಕಳಿಸುವಂತಹ ಪ್ರಯತ್ನಗಳು ನಡೆಯುತ್ತಿವೆ. ಕೃಷಿ ಹೊಂಡಗಳು ಹಾಗೂ ಕೃಷಿ ಯಂತ್ರಧಾರೆ ಯೋಜನೆಗಳು ಪರಿಣಾಮಕಾರಿಯಾಗಿ ನಡೆಯುವುದು ನೋಡಿಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಆಶ್ವಾಸನೆಯನ್ನು ನೀಡಿದ್ದಾರೆ.

ಇದೀಗ ಮುಂದಿನ ಆಯವ್ಯಯದಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎನ್ನಲಾಗಿದೆ. ಇದು ರಾಜ್ಯದ ರೈತರಲ್ಲಿ ಇನ್ನಷ್ಟು ಹೆಚ್ಚಿನ ಭರವಸೆಯನ್ನು ಮೂಡಿಸಿದೆ. ಕಾಂಗ್ರೆಸ್ ಈ ಮೂಲಕ ಎಲ್ಲ ವರ್ಗದವರ ಸಂತುಷ್ಟೀಕರಣಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ.

ತಮ್ಮ ಪ್ರಮುಖ ಗ್ಯಾರಂಟಿ ಯೋಜನೆಗಳ ಜೊತೆಗೆ ಕೃಷಿಕರ ಪರಿಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದುವರೆದು ಇನ್ನಷ್ಟು ಸಮಸ್ಯೆಗಳನ್ನು ನೆಲಮಟ್ಟದಲ್ಲಿ ಗುರುತಿಸಿ ಅದಕ್ಕೆ ಪರಿಹಾರ ನೀಡುವ ಕೆಲಸವನ್ನು ಮಾಡಬೇಕಾಗಿದೆ.

ಕೇವಲ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಹೆಸರಾಗಿದ್ದಂತಹ ಈ ಬಾರಿಯ ಕಾಂಗ್ರೆಸ್ ಸರ್ಕಾರ ಮುಂದುವರೆದು ಇಂತಹ ಪ್ರಮುಖ ಕಾರ್ಯಗಳನ್ನು ಮಾಡುತ್ತಿದ್ದು ನಿಜಕ್ಕೂ ಎಲ್ಲರ ಗಮನವನ್ನು ಸೆಳೆದಿದೆ.

ಇತರೆ ವಿಷಯಗಳು:

ಯಜಮಾನಿಯರೇ ಗಮನಿಸಿ, ರಾಜ್ಯದ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಹಣ ಜಮಾ ಆಗಲ್ಲ, ತಪ್ಪದೆ ನೀವು ಈ ಕೆಲಸವನ್ನು ಮಾಡಿ.

ಬಡವರಿಗೆ ಭಾಗ್ಯದ ದಿನ ಆರಂಭ..! ನಿಮ್ಮ ಖಾತೆಗೆ ಬಂದಿದೆ 10 ಸಾವಿರ, ಇನ್ನೂ ಹಣ ಬರದಿದ್ದರೆ ಈ ಕೆಲಸ ಮಾಡುವುದು ಉತ್ತಮ

ಗೃಹಲಕ್ಷ್ಮಿಯರೇ ಎಚ್ಚರ..! ಸೈಬರ್‌ನಲ್ಲಿ ಅರ್ಜಿ ಸಲ್ಲಿಸುವ ನೆಪದಲ್ಲಿ ನಿಮಗಾಗಿ ಕಾಯುತ್ತಿದ್ದಾರೆ ಕಳ್ಳರು, ನಿಮ್ಮ ಹಣಕ್ಕೆ ಬರುತ್ತೆ ಕುತ್ತು

Comments are closed, but trackbacks and pingbacks are open.