Kannada industry ಹಿಂದೆಂದೂ ಬರದ ಕಥೆ ಇರುವ ಸಿನಿಮಾದಲ್ಲಿ Ravichandran ನಟಿಸುತ್ತಿದ್ದಾರೆ.

Kannada industry ಹಿಂದೆಂದೂ ಬರದ ಕಥೆ ಇರುವ ಸಿನಿಮಾದಲ್ಲಿ V Ravichandran ನಟಿಸುತ್ತಿದ್ದಾರೆ.

V Ravichandran

V Ravichandran is acting in the movie which has a story screenplay which has never come before in the Kannada industry

ಕ್ರೇಜಿಸ್ಟಾರ್’ ರವಿಚಂದ್ರನ್ (ವಿ ರವಿಚಂದ್ರನ್) ಈಗ ಮೊದಲಿಗಿಂತ ಬ್ಯುಸಿಯಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಉತ್ತಮ ಕಥೆಗಳನ್ನು ಆಯ್ಕೆ ಮಾಡಿಕೊಂಡು ನಾಯಕನಾಗಿಯೂ ನಟಿಸುತ್ತಿದ್ದಾರೆ. ಇದೀಗ ತಮಿಳು ಮೂಲದ ಅನೀಸ್ ಎಂಬ ಯುವ ನಿರ್ದೇಶಕನ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಅನೀಸ್ ಈ ಹಿಂದೆ ಅಮೆರಿಕದ ಮಿಲಿಟರಿ ಮ್ಯಾಗಜೀನ್‌ನಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಅಫ್ಘಾನಿಸ್ತಾನ, ಇರಾನ್, ಇರಾಕ್, ಯೆಮೆನ್ ಮತ್ತು ತಾಂಜಾನಿಯಾದಂತಹ ಮಧ್ಯಪ್ರಾಚ್ಯ ದೇಶಗಳು ಸೇರಿದಂತೆ ಹಲವು ದೇಶಗಳಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅಲ್ಲಿಂದ ತಮಿಳುನಾಡಿಗೆ ಬಂದು ಕೆಲವು ಸಿನಿಮಾಗಳಿಗೆ ಚಿತ್ರಕಥೆ ಮತ್ತು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. 60 ಜಾಹೀರಾತು ಚಿತ್ರಗಳನ್ನು ನಿರ್ದೇಶಿಸಿರುವ ಅನೀಸ್ ಗೆ ರವಿಚಂದ್ರನ್ ಅವರ ಸಿನಿಮಾ ಮೊದಲ ಸಿನಿಮಾ.

‘ಅಮರಾವತಿ ಪೊಲೀಸ್ ಠಾಣೆ’ಗೆ ಜಗ್ಗೇಶ್ ಪುತ್ರ ಗುರುರಾಜ್ ಹೀರೋ; ಶೂಟಿಂಗ್ ಶುರುವಾಯಿತು

‘ರವಿಚಂದ್ರನ್ ಅವರ ಈ ಹಿಂದಿನ ಯಾವ ಚಿತ್ರದಲ್ಲೂ ಈ ರೀತಿಯ ಸ್ಕ್ರಿಪ್ಟ್ ಇರಲಿಲ್ಲ. ನಾನು ಅನೇಕ ಕಡೆ ಕೆಲಸ ಮಾಡಿದ್ದೇನೆ ಮತ್ತು ಕೆಲವು ಕಥೆಗಳನ್ನು ಬರೆದಿದ್ದೇನೆ. ಈ ಕಥೆಯನ್ನು ರವಿ ಸರ್ ಗೆ ಹೇಳಿದಾಗ ಅವರು ಖುಷಿಯಿಂದ ಒಪ್ಪಿಕೊಂಡರು. ಇದೊಂದು ಕೌಟುಂಬಿಕ ಕಮರ್ಷಿಯಲ್ ಸಿನಿಮಾ. ಇಡೀ ಸಿನಿಮಾ ನಾನ್ ಲೀನಿಯರ್ ಸ್ಕ್ರಿಪ್ಟ್ ನಲ್ಲಿ ಸಾಗುತ್ತದೆ. ಪತಿ-ಪತ್ನಿಯರ ನಡುವಿನ ಹಗ್ಗ ಜಗ್ಗಾಟವೇ ಕಥೆಯ ಮುಖ್ಯ ವಸ್ತು. ಗಂಡ-ಹೆಂಡತಿ ನಡುವಿನ ಜಗಳವನ್ನು ಕಾಡಿನಲ್ಲಿ ತೋರಿಸುತ್ತೇವೆ’ ಎಂದರು ನಿರ್ದೇಶಕ ಅನೀಸ್.

ನನ್ನ ಪ್ರಕಾರ ಕನ್ನಡ ಇಂಡಸ್ಟ್ರಿಯಲ್ಲಿ ಈ ರೀತಿಯ ಕಥೆ, ಚಿತ್ರಕಥೆ ಇದುವರೆಗೂ ಬಂದಿಲ್ಲ. ರವಿಚಂದ್ರನ್ ತುಂಬಾ ಖುಷಿಯಾಗಿದ್ದು ಇದನ್ನು ಮಾಡುತ್ತೇನೆ ಎಂದಿದ್ದಾರೆ. ಇಡೀ ಸಿನಿಮಾ ಕಾಡಿನೊಳಗೆ ನಡೆಯುತ್ತದೆ. ನಮ್ಮ ಸಿನಿಮಾದಲ್ಲಿ ಅರಣ್ಯವೂ ಪ್ರಮುಖ ಪಾತ್ರವಾಗುತ್ತದೆ. ರವಿ ಸರ್ ಅವರ ಲುಕ್ ಕೂಡ ಡಿಫರೆಂಟ್ ಆಗಿರುತ್ತದೆ’ ಎಂದರು ನಿರ್ದೇಶಕ ಅನೀಸ್.

‘ವಿಜಯಾನಂದ’ ಚಿತ್ರದ ಟ್ರೈಲರ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು

ಈ ಚಿತ್ರವನ್ನು ರಾಜ್‌ಕುಮಾರ್ ನಿರ್ಮಿಸಲಿದ್ದಾರೆ. ಇದು ರಾಜ್‌ಕುಮಾರ್ ಮತ್ತು ರವಿಚಂದ್ರನ್ ಅವರ ಮೂರನೇ ಕಾಂಬಿನೇಷನ್. ಈ ಹಿಂದೆ ಇಬ್ಬರೂ ಒಟ್ಟಿಗೆ ‘ಕನ್ನಡಿಗ’ ಮತ್ತು ‘ಕ್ರೇಜಿಸ್ಟಾರ್‘ ಸಿನಿಮಾ ಮಾಡಿದ್ದರು.

ಕಾಡಿನಲ್ಲಿ
ಚಿತ್ರೀಕರಣ ಇನ್ನೂ ಹೆಸರಿಡದ ಈ ಚಿತ್ರದ ಸಂಪೂರ್ಣ ಚಿತ್ರೀಕರಣ ಅರಣ್ಯದಲ್ಲಿ ನಡೆಯಲಿದ್ದು, ದಾಂಡೇಲಿ, ಜಮಾಲಿಗುಡ್ಡ ಸೇರಿದಂತೆ ಹಲವು ದೊಡ್ಡ ಅರಣ್ಯಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಮುಂದಾಗಿದೆ. ಬ್ಯಾಂಕಾಕ್‌ನಲ್ಲಿ ಕೆಲವು ದಿನಗಳ ಶೂಟಿಂಗ್ ಕೂಡ ನಡೆಯಲಿದೆ. ‘ಈ ಸಿನಿಮಾದಲ್ಲಿ ರವಿಚಂದ್ರನ್ ರಾಯಲ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಇದುವರೆಗೂ ಇಂತಹ ವಿಭಿನ್ನ ಪಾತ್ರದಲ್ಲಿ ನಟಿಸಿಲ್ಲ ಎಂದು ಕಥೆ ಒಪ್ಪಿಕೊಂಡಿದ್ದಾರೆ’ ಎನ್ನುತ್ತಾರೆ ನಿರ್ಮಾಪಕ ರಾಜಕುಮಾರ್.

ಈ ಚಿತ್ರಕ್ಕೂ ನಾಯಕಿಯ ಆಯ್ಕೆ ಆಗಿಲ್ಲ, ಉತ್ತರ ಭಾರತದಿಂದ ನಾಯಕಿಯನ್ನು ಕರೆತರಲು ಚಿತ್ರತಂಡ ಚಿಂತನೆ ನಡೆಸಿದೆ. ಈ ಕುರಿತು ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ಪ್ರಕಟಿಸಲಾಗುವುದು.

“ನಾನು ಈ ಕಥೆಯನ್ನು ಬರೆದಾಗ ರವಿಚಂದ್ರನ್ ಅವರು ಅದಕ್ಕೆ ಸೂಕ್ತ ಎಂದು ಭಾವಿಸಿದ್ದೆ. ಅದಕ್ಕಾಗಿ ರಾಜಕುಮಾರ್ ಅವರನ್ನು ಭೇಟಿ ಮಾಡಿ ಕಥೆ ಹೇಳಿದ್ದೆ. ಇದು ಗಂಡ ಹೆಂಡತಿ ನಡುವಿನ ಕಥೆ. ಹೊಸ ರೀತಿಯ ಚಿತ್ರಕಥೆ ಮತ್ತು ಮೇಕಿಂಗ್ ಇರಲಿದೆ. ಡಿಸೆಂಬರ್ 15ರಿಂದ ಚಿತ್ರೀಕರಣ ಆರಂಭಿಸಲಿದ್ದೇವೆ’ ಎಂದು ನಿರ್ದೇಶಕ ಅನೀಸ್ ಹೇಳಿದ್ದಾರೆ.

‘ಅಣ್ಣವ್ನ ಅಪ್ಪುಗೆ ನನ್ನನ್ನು ನಟನನ್ನಾಗಿ ಮಾಡಿದೆ, ಅಪ್ಪು ಅಪ್ಪುಗೆ ನನ್ನ ಅದೃಷ್ಟ..’- ರವಿಚಂದ್ರನ್

ಕನ್ನಡ ಚಲನಚಿತ್ರಗಳ ಕುರಿತು ಹೆಚ್ಚಿನ ಸುದ್ದಿ ನವೀಕರಣಗಳನ್ನು dailykannadanews.com ಇಂದ ಪಡೆಯಿರಿ…

ಇತರೆ ವಿಷಯಗಳು :

ATM Card ಮರೆತಿರಾ? UPI ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಕ್ರಮಗಳನ್ನು ಪರಿಶೀಲಿಸಿ

Online ವ್ಯಾಪಾರದ 6 ಅತ್ಯುತ್ತಮ 2022-2023ರ ಐಡಿಯಾಗಳು

ಕೇಂದ್ರ ಸರ್ಕಾರದ ವರದಿಯು ಕರ್ನಾಟಕ Government School ಕೊರತೆಯನ್ನು ಕಂಡುಹಿಡಿದಿದೆ –

Comments are closed, but trackbacks and pingbacks are open.